garaj baras pyaasi dharati par phir paani de maulaa
chidiyon ko daane, bachchon ko gud-dhaani de maulaa
ದೇವರೇ, ಒಣಗಿ ಬಾಯಾರಿದ ಭೂಮಿಗೆ ಗುಡುಗಿ ಅಬ್ಬರಿಸಿ ಸುರಿಯುವ ಮಳೆ ನೀಡು
ಗುಬ್ಬಚ್ಚಿಗಳಿಗೆ ಧಾನ್ಯ-ಕಾಳುಗಳನ್ನು, ಮಕ್ಕಳಿಗೆ ಭದ್ರತೆ ನೀಡು
do aur do ka jod hameshaa chaar kahaan hotaa hai
soch samajhwaalon ko thodi naadaani de maulaa
ಎರಡು ಎರಡರ ಕೂಡಿಕೆ ಯಾವಾಗಲೂ ನಾಲ್ಕು ಆಗುವುದುಂಟೆ?
ದೇವರೇ, ಬುದ್ಧಿವಂತರಿಗೆ ಸ್ವಲ್ಪ ದಡ್ಡತನವನ್ನು ನೀಡು
phir raushan kar zehar kaa pyaalaa, chamkaa nayii saliibe
jhuuton ki duniyaa mein sach ko taabaani de maulaa
ವಿಷದ ಬಟ್ಟಲನ್ನು ಮತ್ತೆ ಪ್ರಕಾಶಿಸು, ಹೊಸ ಸಿಲುಬೆಯೊಂದಕ್ಕೆ ಮೆರಗು ನೀಡು
ದೇವರೇ, ಸುಳ್ಳುಗಳ ಈ ಲೋಕದಲ್ಲಿ ಸತ್ಯಕ್ಕೆ ಹೊಳಪು ನೀಡು
(ಇಲ್ಲಿ ಕವಿ, ಸಾಕ್ರಟೀಸ್ ಮತ್ತು ಕ್ರಿಸ್ತ್ರರನ್ನು ಉಲ್ಲೇಖಿಸುತ್ತಾರೆ. ವೈಜ್ಞಾನಿಕ ಸತ್ಯಗಳನ್ನು ಜಗತ್ತಿಗೆ ಪರಿಚಯಿಸಲು ಹೊರಟ ಸಾಕ್ರಟೀಸ್ಗೆ ವಿಷದ ಬಟ್ಟಲನ್ನು ಕೊಡಲಾಯಿತು. ಅದು ವಿಷವೆಂದು ಗೊತ್ತಿದ್ದರೂ ಸಾಕ್ರಟೀಸ್ ತನ್ನ ವೈಚಾರಿಕತೆಗೆ ಹೆಚ್ಚು ಜನಪ್ರಿಯತೆ ಬರಲೆಂದು ಅದನ್ನು ಸೇವಿಸಿ ಪ್ರಾಣಬಿಟ್ಟ. ತನ್ನ ನೀತಿ-ವಿಚಾರಗಳನ್ನು ದಮನ ಮಾಡಲು ಹಿಂಸೆಯ ಮಾರ್ಗ ಹಿಡಿದ ಸಮಾಜಕ್ಕೆ ಹೆದರದೇ ಕ್ರೀಸ್ತ ಮಾಡಿದ್ದೂ ಅಂಥದೇ ಆತ್ಮ ಬಲಿದಾನ. ಅಂತೆಯೇ ಕವಿ ದೇವರಲ್ಲಿ ಈ ಸುಳ್ಳುಗಳ ಲೋಕದಲ್ಲಿ ಸತ್ಯವನ್ನು ವಿಜ್ರಂಭಿಸಲು ಸಾಕ್ರಟೀಸ್ ಮತ್ತು ಕ್ರಿಸ್ತರಂಥವರು ಮತ್ತೆ ಬರಲಿ ಎಂದು ಬೇಡುತ್ತಾರೆ.)
phir muurat se baahar aakar caaro aur bikhar jaa
phir mandir ko koi meera diiwaani de maulaa
ಮತ್ತೆ ಪ್ರತಿಮೆಯಿಂದ ಹೊರಬಂದು ನಾಲ್ಕೂ ದಿಕ್ಕುಗಳಲ್ಲಿ ಹರಡಿಕೊ
ದೇವರೇ, ಮಂದಿರಕ್ಕೆ ಮತ್ತೆ ಒಬ್ಬ ಹುಚ್ಚು ಮೀರಾಳನ್ನು ನೀಡು
tere hote koi kisi ki jaan kaa dushman kyun ho
jeenewaalon ko marne ki aasaani de maulaa
ನೀನು ಇರುವುದು ಸತ್ಯವೆಂದರೂ ಜನ ಪರಸ್ಪರ ಪ್ರಾಣ ಶತ್ರುಗಳಾಗುತ್ತಿರುವುದೇಕೆ?
ದೇವರೇ, ಜೀವನ ಸಾಗಿಸುತ್ತಿರುವವರಿಗೆ ಸಾವನ್ನು ಸುಲಭವಾಗಿಸು
(ಅಂದರೆ, ಜನ ನೆಮ್ಮದಿಯಿಂದ - ಯಾವ ದ್ವೇಷ, ಹಗೆತನವಿಲ್ಲದೇ ಬದುಕಿ ನೆಮ್ಮದಿಯಿಂದಲೇ ಸಾವು ಪಡೆಯಲಿ.)